ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭಕ್ತನಿವಾಸದ ಮುಖ್ಯ ಉದ್ದೇಶವೇ ಭಕ್ತಹಿತ.
ಈಶಾವಾಸ್ಯಮ್ ನ ಒಟ್ಟು ಪ್ರದೇಶದ ಅರ್ಧದಷ್ಟು ಸ್ಥಳದಲ್ಲಿ ಮಾತ್ರ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಉಳಿದ ಸ್ಥಳಾವಕಾಶವು ಪ್ರಕೃತಿಗಾಗಿ ಮೀಸಲಿರಲಿದೆ.120 ಸುಸಜ್ಜಿತ ಕೊಠಡಿಗಳಿರುವ 5 ಮಹಡಿಗಳ ಈ ಕಟ್ಟಡವು ಹವಾನಿಯಂತ್ರಕ, ಪವರ್ ಬ್ಯಾಕಪ್ ಇವೇ ಮೊದಲಾದ ಸೌಕರ್ಯಗಳನ್ನು ಹೊಂದಿರಲಿದೆ. ಆಧುನಿಕ ಸೌಕರ್ಯಗಳಿಂದ ಕೂಡಿದ ಅಚ್ಚುಕಟ್ಟಾದ ಕೊಠಡಿ, ಕಾರ್ಯಕ್ರಮಗಳನ್ನು ನಡೆಸಲು ಒಂದು ಸಭಾಂಗಣ. ಇದರ ಜೊತೆಗೆ ಆಧುನಿಕ ಸೌಲಭ್ಯಗಳಾದ ಜಿಮ್, ಈಜುಕೊಳ, ಹಾಗೂ ಮಕ್ಕಳ ಆಟದ ಪ್ರದೇಶಗಳನ್ನೂ ಈಶಾವಾಸ್ಯಮ್ ಹೊಂದಿರಲಿದೆ.
ಇದೋ ಈಶಾವಾಸ್ಯಮ್ ನ ಪಕ್ಷಿನೋಟ ನಿಮಗಾಗಿ...
Facebook:
Twitter:
Youtube:
Website:
Blog:
0 Comments